ಚಿತ್ರ : ಒಡೆಯ
ಸಂಗೀತ : ಅರ್ಜುನ ಜನ್ಯ
ಸಾಹಿತ್ಯ : ಜಯಂತ್ ಕಾಯ್ಕಿಣಿ
ಕಾಣೆಯಾಗಿರುವೆ ನಾನೂ, ಎದುರಲಿ ಕಾಣುತಿರುವಾಗ ನೀನು..
ಗಾಯಕೆ ಕುಡಿನೋಟ ಸಾಕು, ಮಾಯಿಸೋ ಒಡನಾಟ ಬೇಕು ,
ಮಾತಾಡುವ ದೇವರು ನೀನು..!
ಕಾಣೆಯಾಗಿರುವೆ ನಾನೂ, ಎದುರಲಿ ಕಾಣುತಿರುವಾಗ ನೀನು |೨|
ನಿನ್ನ ಕಿರುಬೆರಳ ತುಟಿಯಲಿ ಕುಣಿಸು ನನ್ನ,
ಸಣ್ಣ ಪರಿಮಳವ ಉಸಿರಲಿ ಬೆರೆಸೋ ಚಿನ್ನ,
ನೀನು ತೊಟ್ಟಿರುವ ಉಡುಪಿಗೂ ಎಷ್ಟು ಜಂಬ ,
ನೀನು ಸಿಗದಿರಲು ಅಲೆಯುವೆ ಊರ ತುಂಬಾ,
ಪ್ರೀತಿಯ ಅವತಾರ ನೂರು.. ತೋರುತ ನೀ ಸನಿಹ ಕೂರು..
ಈ ಜೀವದ ಕಾಳಜಿ ನೀನು..!
ಕಾಣೆಯಾಗಿರುವೆ ನಾನೂ, ಎದುರಲಿ ಕಾಣುತಿರುವಾಗ ನೀನು..
ನಿನ್ನ ನೆನಪುಗಳೇ ಮನಸಿಗೆ ಪಾರಿಜಾತ,
ದಿವ್ಯ ನಸುನಗುವೇ ಕನಸಿನ ಜಾಹೀರಾತ,
ನೀನು ಕರೆದರೆ ನಾ ಬರುವೆನು ಹಾಗೇನಿಲ್ಲ.
ನಿನ್ನ ಜೊತೆಗಿರುವ ಕ್ಷಣಗಳೇ ಜೋನಿಬೆಲ್ಲ.
ವಾಸಿಸು ಕನಸಲ್ಲಿ ಬಂದು, ಪ್ರೀತಿಸು ಹೃದಯಾನೇ ನಿಂದು,
ನೀನಿಲ್ಲದೆ ತಬ್ಬಲಿ ನಾನೂ..!
ಕಾಣೆಯಾಗಿರುವೆ ನಾನೂ, ಎದುರಲಿ ಕಾಣುತಿರುವಾಗ ನೀನು.. |೨|