ಚಿತ್ರ : ಮುಗುಳು ನಗೆ (2017)
ನಿರ್ದೇಶಕರು: ಯೋಗರಾಜ್ ಭಟ್
ಸಂಗೀತ ನಿರ್ದೇಶಕರು: ವಿ.ಹರಿಕೃಷ್ಣ
ಸಾಹಿತ್ಯ : ಯೋಗರಾಜ್ ಭಟ್
ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ ಚಂದ್ರ ಅಂಗಿ ಬಿಚ್ಚಿ,ಹುಡುಗಿ ನೆನಪಾದಾಗ ಬೆವರು ಜಾಸ್ತಿ, ಅಂದ ಕಣ್ಣು ಮುಚ್ಚಿ..
ಯಾರ್ ಬಿತ್ತಿಲ್ಲ ಬೆಳೆದಿಲ್ಲ ಎದೆ ತುಂಬಾ ಅರಳ್ಯಾವೇ ಕಿಡಿಗೇಡಿ ಕೆಂದಾವರೆ..
ನಾವ ಕನಸಲ್ಲಿ ಹೆಂಗಪ್ಪಾ ಆರಾಮಾಗಿರಬೇಕು ಹಗಲಹೊತ್ತೆ ಹಿಂಗ್ ಆದರೆ..
ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ ಚಂದ್ರ ಅಂಗಿ ಬಿಚ್ಚಿ,
ಹುಡುಗಿ ನೆನಪಾದಾಗ ಬೆವರು ಜಾಸ್ತಿ, ಅಂದ ಕಣ್ಣು ಮುಚ್ಚಿ..
ಹಿoಗೆ ಹಿಂದೊಮ್ಮೆ ಎಂದೋ ನಡೆದಂತೆ ಸುತ-ಮುತ್ತ ಮರೆತು ಕುಂತೆ..
ಹೊಂಗೆ ಮರದಲ್ಲಿ ಹೆಸರು ಕೆತ್ತಿದ್ದು ಮತ್ತೆ-ಮತ್ತೆ ನೆನಪಾದಂತೆ..
ಮನದ ಗುಡಿಯಲ್ಲಿ ಹಚ್ಚಿಕೊಂಡಿರುವ ಒಂದು ಎರಡು ಮೂರು ಹಣತೆ...
ಬಿರುಗಾಳಿ ಮುಂದೆ ಬೊಗಸೆ ಸಾಲಲ್ಲ ಅನ್ನೋದನ್ನೇ ನಾನು ಮರೆತೇ..
ಎರಡು ರೇಖೆ ಸಾಲೋದಿಲ್ಲ ಅಂತನಿಸಿ ಎಳಕೊಂಡೆ ಹಣೆಮೇಲೆ ಮೂರನೇ ಗೆರೆ..
ಈ ಬದುಕಲ್ಲಿ ಯಾವನೂ ಆರಾಮಾಗಿರಲಾರ ಹಳೆ ನೆನಪೇ ನಿಂತೋದರೆ...
ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ ಚಂದ್ರ ಅಂಗಿ ಬಿಚ್ಚಿ,
ಹುಡುಗಿ ನೆನಪಾದಾಗ ಬೆವರು ಜಾಸ್ತಿ, ಅಂದ ಕಣ್ಣು ಮುಚ್ಚಿ..
ತುಂಬಾ ಅನಿಸುವದು ನನ್ನಂಥ ನನಗೂ ಪ್ರೀತಿ ಇನ್ನೂ ಗೊತ್ತಾಗಿಲ್ಲ..
ಹಾಂಗಾಗಿ ನಾನು ನನ್ನ ಜೊತೆಗೇನೆ ಜಾಸ್ತಿ ಏನು ಮಾತಾಡಲ್ಲ..
ಒಂದು ಸರಿಯಾದ ದುಃಖ ಇರದಿದ್ರೆ ಕಣ್ಣು ಕೂಡ ತುಂಬೋದಿಲ್ಲ..
ತುಂಬಾ ಪ್ರೀತಿಸುವೆ ತುಂಟುತನವನ್ನೂ ಗಾಂಭೀರ್ಯವೇ ನನಗಾಗಲ್ಲ..
ಯಾವ ಕನಸಲ್ಲೂ ನಾನಂತೂ ಯಾವತ್ತೂ ನೋಡಿಲ್ಲ ಯಾರ್ ಮೇಲೂ ಬಟ್ಟೆ ಬರೇ..
ನಾ ಅನಿಸಿದ್ದು ಹೇಳಿರುವೆ ನನ್ನ ಹುಡುಗೀರೆ ಕ್ಷಮಿಸಿ ನೀವೆಲ್ಲ ಸಿಟ್ಟಾದರೆ..
ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ ಚಂದ್ರ ಅಂಗಿ ಬಿಚ್ಚಿ,
ಹುಡುಗಿ ನೆನಪಾದಾಗ ಬೆವರು ಜಾಸ್ತಿ, ಅಂದ ಕಣ್ಣು ಮುಚ್ಚಿ..